ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ 2023 ಮುಂಗಾರು ಹಂಗಾಮಿನ ಬೆಳೆ ವಿಮೆ ಜಮಾ ಆಗಿರುವ ಕುರಿತು ಮಾಹಿತಿ ತಿಳಿದುಕೊಳ್ಳೋಣ.crop insurance status
2023 2024ನೇ ಸಾಲಿನ ಪ್ರಸಕ್ತ ವರ್ಷದ ಖಾರಿಫ್ ಬೆಳೆಯ ಅಥವಾ ಮುಂಗಾರು ಬೆಳೆ ವಿಮೆ ಪ್ರೀಮಿಯಂ ತುಂಬಲು , ಕೇಂದ್ರದ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿತ್ತು.
ಪಿಎಂ ಕಿಸಾನ್ 15ನೇ ಕಂತಿನ ಹಣ ಜಮಾ ..! Pm kisan 15th installment date..
Crop insurance status .
ಅದರಂತೆ ರಾಜ್ಯದ ರೈತರು ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ, ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಆಯಾ ಜಿಲ್ಲೆಗಳ ಮತ್ತು ಆಯಾ ತಾಲೂಕಿನ ಬೆಳೆ ಸಮೀಕ್ಷೆ ಅನುಗುಣವಾಗಿ , ಬೆಳೆ ವಿಮೆ ಅರ್ಜಿ ಸಲ್ಲಿಕೆ ಆಗಿತ್ತು.
ಆದರೆ ಈ ವರ್ಷ ಮುಂಗಾರು ಮಳೆ ವಾರ್ಷಿಕ ಶೇಕಡ 25% ಪ್ರತಿಶತ ಮಾತ್ರವೇ ಸುರಿದಿದ್ದು, ಬರಗಾಲ ಎಂದು ಘೋಷಣೆ ಆಗಿದೆ. ಆದ್ದರಿಂದ ರಾಜ್ಯದ ಬರಗಾಲ ಘೋಷಣೆ ಗೊಂಡ 125 ತಾಲೂಕುಗಳಿಗೆ ಬರ ಪರಿಹಾರ ಮತ್ತು ಮದ್ಯಂತರ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ.
Crop insurance last date : ಈಗಲೇ ಅರ್ಜಿ ಸಲ್ಲಿಸಿ.
ಹಾವೇರಿ ಜಿಲ್ಲೆ ಬರಗಾಲ ಎಂದು ಘೋಷಣೆ ಆದ ನಂತರ ಜಿಲ್ಲೆಗೆ ಒಟ್ಟು 126 ಕೋಟಿ ಮಧ್ಯಂತರ ಬೆಳೆ ವಿಮೆಯನ್ನು ಸರ್ಕಾರ ರೈತರಿಗೆ ಡಿಬಿಟಿ ಮೂಲಕ ನೇರವಾಗಿ , ಖಾತೆಗೆ ಹಣ ಜಮಾ ಮಾಡಿದೆ.
ಇದೇ ತಿಂಗಳ 7 ರಿಂದ ಬೆಳೆ ವಿಮೆ ಹಣ ವರ್ಗಾವಣೆ ಮಾಡುತ್ತಿದ್ದು, ಇನ್ನೂ ಜಮಾ ಮಾಡುವ ಪ್ರಕ್ರಿಯೆ ಕಾರ್ಯಗತವಿದೆ. ಒಂದು ಎಕರೆಗೆ ಸುಮಾರು 1250 ರೂಪಾಯಿ ಅಷ್ಟು ಹಣ ನೀಡಿದ್ದು, ಇದು ಈಗ ಮಧ್ಯಂತರ ಬೆಳೆ ವಿಮೆ ಆಗಿದೆ.
Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.
ಇನ್ನು ಉಳಿದ ಬೆಳೆ ವಿಮೆಯನ್ನು ಮುಂದಿನ ದಿನಗಳಲ್ಲಿ ಜಮಾ ಮಾಡಲಾಗುವುದು. ಒಂದು ವೇಳೆ ನಿಮಗೆ ಬೆಳೆ ವಿಮೆ ಹಣ ವರ್ಗಾವಣೆ ಆಗಿಲ್ಲ ಎಂದಲ್ಲಿ , ನೀವು ಬೆಳೆ ವಿಮೆ ಅರ್ಜಿ ಸಲ್ಲಿಸಿದ csc kendra, grama one , ಕೇಂದ್ರದಲ್ಲಿ ವಿಚಾರಣೆ ಮಾಡಬಹುದು.